ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬೆಂಗಳೂರು ಯಕ್ಷಪ್ರಿಯರಿಗೆ 5 ದಿನ ಯಕ್ಷ ರಸಗವಳ

ಲೇಖಕರು : ಉದಯವಾಣಿ
ಶನಿವಾರ, ಜುಲೈ 2 , 2016
ಜುಲೈ 2 , 2016

ಬೆಂಗಳೂರು ಯಕ್ಷಪ್ರಿಯರಿಗೆ 5 ದಿನ ಯಕ್ಷ ರಸಗವಳ

ಬೆಂಗಳೂರು : ಯಕ್ಷಗಾನ ಪ್ರಿಯರು ಈ ಮಳೆಗಾಲದಲ್ಲಿ ಯಾವ ಕಡೆ ಹೋಗೋದು ಅಂತ ಗೊತ್ತಾಗದೇ ಒದ್ದಾಡುವಂಥ ಪರಿಸ್ಥಿತಿ ಈಗ. ಅಷ್ಟೊಂದು ಯಕ್ಷಗಾನ ಪ್ರಸಂಗಗಳ ಮಧ್ಯೆ ಇಲ್ಲೊಂದು ವಿಶೇಷ ಯಕ್ಷಗಾನ ಪ್ರದರ್ಶನ ನಿಮಗಾಗಿ ಕಾದಿದೆ. ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಂಗಗಳು, ವಿಚಾರ ಸಂಕಿರಣಗಳೆಲ್ಲಾ ಇವೆ.

ಮೊದಲ ದಿನ

ಜು. 6ಕ್ಕೆ ಈ ಕಾರ್ಯಕ್ರಮ ಉದ್ಘಾಟನೆಗೊಳ್ಳುತ್ತದೆ. ರಾತ್ರಿ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ತಂಡದಿಂದ "ಮೋಹಿನಿ ಭಸ್ಮಾಸುರ' ಪ್ರಸಂಗ ನಡೆಯಲಿದೆ. ಅದೇ ದಿನ ಭೀಷ್ಮ ಪ್ರತಿಜ್ಞೆ, ಭೀಷ್ಮ ವಿಜಯ ಪ್ರಸಂಗಗಳು ಜರುಗಲಿವೆ. ಇದರಲ್ಲಿ ಭೀಷ್ಮನಾಗಿ ಬಳ್ಕೂರು ಕೃಷ್ಣಯಾಜಿ ಅವರು ಮಿಂಚಲಿದ್ದಾರೆ. ಮಧ್ಯರಾತ್ರಿ 2.30ಕ್ಕೆ ಪೆರ್ಡೂರು ಮೇಳದಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಲಿದೆ.

ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ

ಯಾವಾಗ?: ಜು. 6, ಬುಧವಾರ, ಸಂಜೆ 6ಕ್ಕೆ ಪ್ರಾರಂಭ

ಪ್ರವೇಶ: ಉಚಿತ

ಎರಡನೇ ದಿನ

ಯಕ್ಷಗಾನ ಮತ್ತು ರವೀಂದ್ರ ಕಲಾಕ್ಷೇತ್ರದ ಒಡನಾಟದ ಬಗ್ಗೆ ಒಂದು ವಿಚಾರ ಸಂಕಿರಣ ನಡೆಯಲಿದ್ದು ಪ್ರೊ. ಎಂಎಲ್‌ ಸಾಮಗ ಅವರ ಅಧ್ಯಕ್ಷತೆಯಲ್ಲಿ ವಿಚಾರ ಮಂಡನೆ ನಡೆಯಲಿದೆ. ಅನಂತರ ಬಡಗು-ತೆಂಕು ತಿಟ್ಟುಗಳ ನವರಸಗಾಯನ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಮಂಟಪ ಪ್ರಭಾಕರ ಉಪಾಧ್ಯ ಅವರ ಏಕವ್ಯಕ್ತಿ ಪ್ರದರ್ಶನವಿದೆ. ಕೊನೆಗೆ ತೆಂಕು ತಿಟ್ಟಿನ ರತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಎಲ್ಲಿ?: ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರ ಪಕ್ಕ, ಕನ್ನಡ ಭವನ, ಜೆಸಿ ರಸ್ತೆ

ಯಾವಾಗ?: ಜು. 7, ಗುರುವಾರ, ಸಂಜೆ 5ಕ್ಕೆ ಪ್ರಾರಂಭ







ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ